ಯಕ್ಷಸಿರಿ: ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ಸಮಾರೋಪ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಡಿಸೆ೦ಬರ್ 14 , 2013
|
ಡಿಸೆ೦ಬರ್ 14, 2013
|
ಯಕ್ಷಸಿರಿ: ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ಸಮಾರೋಪ
ಉಡುಪಿ :
‘ಯಾವುದೇ ಕಲೆ ಸಾಕಷ್ಟು ಪ್ರಯೋಗಕ್ಕೆ ಒಳಗಾಗಿ ಹೊಸ ಸ್ವರೂಪ ಪಡೆದುಕೊಳ್ಳವುದು ಸ್ವಾಭಾವಿಕ. ಆದರೆ ಆ ಕಲೆಯ ಮೂಲ ಸತ್ತ್ವಕ್ಕೆ ಚ್ಯುತಿ ಬರಬಾರದು. ರಂಗದ ಚೌಕಟ್ಟಿನ ಒಳಗೆಯೇ ಬದಲಾವಣೆಗಳಾಗಲಿ’ ಎಂದು ಕಲಾವಿದ ಹಾಗೂ ಖ್ಯಾತ ವೈದ್ಯ ಡಾ. ಭಾಸ್ಕರಾನಂದ ಕುಮಾರ್ ನುಡಿದರು.
ಅವರು ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಕಲಾಮಂಟಪದಲ್ಲಿ ನಡೆದ ಮೂರು ದಿನಗಳ ಬಡಗುತಿಟ್ಟು ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ ಪ್ರೊ. ಹಿರಂಜೆ ಕೃಷ್ಣ ಭಟ್ ಮಾತನಾಡಿ ಹೊಸ ತಲೆಮಾರನ್ನು ಕಲೆಯ ಕಡೆಗೆ ಮುಖ ಮಾಡುವುದಕ್ಕೆ ಈ ರೀತಿಯ ಸ್ಪರ್ಧೆ ಪೂರಕ ಎಂದರು. ಪ್ರಾಂಶುಪಾಲರು ಪ್ರೊ. ಹಾ.ಲಾ.ನಾಯಕ್, ಸ್ಪರ್ಧೆಯ ತೀರ್ಪುಗಾರರಾದ ಪ್ರೊ. ಅಂಬಾತನಯ ಮುದ್ರಾಡಿ, ಡಾ.ಗಣಪತಿ ಭಟ್, ಕೆ. ಅಜಿತ್ ಕುಮಾರ್ ಉಪಸ್ಥಿತರಿದ್ದರು. ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿದರು. ಸದಾಶಿವ ಶೆಟ್ಟಿಗಾರ್ ವಿಜೇತರ ವಿವರ ವಾಚಿಸಿದರು.
ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್-2013ರ ಅಂಗವಾಗಿ ನಡೆದ ಬಡಗಿತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಉಡುಪಿ ಪ್ರಥಮ ಬಹುಮಾನವನ್ನು, ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ದ್ವಿತೀಯ ಬಹುಮಾನವನ್ನು, ಡಾ.ಎ.ವಿ.ಬಾಳಿಗಾ ಇಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ & ರೂರಲ್ ಮ್ಯಾನೆಜ್ಮೆಂಟ್ ಕಾಲೇಜು ಹಾರಾಡಿ ಬ್ರಹ್ಮಾವರ ತೃತೀಯ ಬಹುಮಾನವನ್ನು ಪಡೆದರು. ಪ್ರಥಮ ಬಹುಮಾನ ರೂ.20,000, ದ್ವಿತೀಯ ಬಹುಮಾನ ರೂ.15000, ತೃತೀಯ ಬಹುಮಾನ ರೂ.10000 ಮತ್ತು ಶಾಶ್ವತ ಫಲಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿತು. ವೈಯಕ್ತಿಕ ವಿಭಾಗದಲ್ಲಿ ಉತ್ತಮ ರಾಜವೇಷ ಮಿಲಾಗ್ರಿಸ್ ಕಾಲೇಜಿನ ಅಶ್ವತ್, ಉತ್ತಮ ಪುಂಡುವೇಷ ಶೈಲೇಶ್ ನಾಯಕ್ ( ಎ.ವಿ.ಬಾಳಿಗಾ ಕಾಲೇಜು) , ಉತ್ತಮ ಬಣ್ಣದ ವೇಷ ಅಭಿಷೇಕ್ ರಾವ್ ( ಪಿ.ಪಿ.ಸಿ ಕಾಲೇಜು), ಉತ್ತಮ ಸ್ತ್ರೀ ವೇಷ ಅಶ್ವಿನಿ ಶಾಸ್ತ್ರಿ
( ಪಿ.ಪಿ.ಸಿ ಕಾಲೇಜು), ಉತ್ತಮ ಹಾಸ್ಯ ಪವನ್ ( ಪಿ.ಪಿ.ಸಿ ಕಾಲೇಜು), ಶಿಸ್ತು ಬದ್ಧ ತಂಡ ಪೂರ್ಣಪ್ರಜ್ಞ ಕಾಲೇಜು ಉಡುಪಿ, ಸೃಜನಶೀಲ ತಂಡ ಪೂರ್ಣಪ್ರಜ್ಞ ಕಾಲೇಜು ಉಡುಪಿ ಇವರು ಪಡೆದರು.
ಕೃಪೆ :
http://rnnlive.com
|
|
|